ವಿದ್ಯಾರ್ಥಿಯ ಬೆತ್ತಲೆಗೊಳಿಸಿ ಹಲ್ಲೆ: ವಸ್ತುಗಳು ದೋಚಿ ಪರಾರಿ

Update: 2019-01-17 17:31 GMT

ಬೆಂಗಳೂರು, ಜ.17: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ ಅವರನ್ನು ಬೆತ್ತಲೆಗೊಳಿಸಿ ಸೊತ್ತುಗಳನ್ನು ದೋಚಿದ ಕುರಿತು ಸರ್ಜಾಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಒಬ್ಬರ ಮಗನಾದ ಈ ವಿದ್ಯಾರ್ಥಿ ಮೇಲೆ ಜ.14 ರಂದು ಮೂವರ ತಂಡವು ಹಲ್ಲೆ ಮಾಡಿ ಸೊತ್ತು ದೋಚಿತ್ತು.

ಬಸ್ ತಪ್ಪಿದ ಕಾರಣ ಸುಮಾರು 1.5 ಕಿಮೀ ನಡೆದು ಹೋಗಬೇಕಾಯಿತು. ಆಗ ಮೂವರು ದಿಢೀರನೆ ಬಂದು ವಿನಾಕಾರಣ ಹಲ್ಲೆ ಮಾಡಿದರು. ಮಾದಕ ವಸ್ತು ಸೇವಿಸಿ ಮದ್ಯಪಾನ ಮಾಡಿದವರಂತೆ ಇದ್ದ ಈ ಮೂವರು ಸಮೀಪದ ಗದ್ದೆಗೆ ಎಳೆದೊಯ್ದರು. ಹಲ್ಲೆಯ ಬಳಿಕ ನನ್ನನ್ನು ಬೆತ್ತಲೆ ಮಾಡಿದರು ಎಂದು ವಿದ್ಯಾರ್ಥಿ ದೂರಿದ್ದಾರೆ.

ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಿ, ಬೆಲ್ಟ್‌ನಿಂದ ಮರಕ್ಕೆ ಕಟ್ಟಿ ಹಾಕಿದರು. ಪ್ಲಾಸ್ಟಿಕ್ ಪೇಪರ್‌ಗೆ ಬೆಂಕಿ ಹಚ್ಚಿ ಮುಖಕ್ಕೆ ಹಿಡಿದರು. ಮುಖಕ್ಕೆ ಉಗಿದು ಮೈಮೇಲೆ ಮೂತ್ರ ಮಾಡಿದರು. ಮೊಬೈಲ್, ಸ್ಮಾರ್ಟ್ ವಾಚ್, ಪರ್ಸ್, ಎಟಿಎಂ ಕಾರ್ಡ್, ಪಾನ್‌ಕಾರ್ಡ್, ಬಟ್ಟೆ, ಶೂ ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News