ಮಾಜಿ ಕೇಂದ್ರ ಸಚಿವ ಶ್ರೀಕಾಂತ್ ಜೇನಾ, ಮಾಜಿ ಶಾಸಕ ಕೃಷ್ಣ ಚಂದ್ರ ಸಾಗರಿಯಾ ಕಾಂಗ್ರೆಸ್ ಪಕ್ಷದಿಂದ ಹೊರಕ್ಕೆ

Update: 2019-01-20 06:01 GMT
ಕೃಷ್ಣ ಚಂದ್ರ ಸಾಗರಿಯಾ, ಶ್ರೀಕಾಂತ್ ಜೇನಾ

ಭುವನೇಶ್ವರ , ಜ.20:  ಮಾಜಿ ಕೇಂದ್ರ ಸಚಿವ ಶ್ರೀಕಾಂತ್ ಜೇನಾ ಮತ್ತು ಕೊರಾಪುಟ್ ಮಾಜಿ ಎಂಎಲ್ಎ ಕೃಷ್ಣ ಚಂದ್ರ ಸಾಗರಿಯಾರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ

ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಶ್ರೀಕಾಂತ್ ಜೇನಾ ಮತ್ತು  ಕೃಷ್ಣ ಚಂದ್ರ ಸಾಗರಿಯಾ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಲಾಗಿದೆ ಎಂದು ಒಡಿಶಾ ಕಾಂಗ್ರೆಸ್ ನ  ಶಿಸ್ತುಸಮಿತಿಯು ಹೊರಡಿಸಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸುವ ಒಪಿಸಿಸಿ  ನಿರ್ಧಾರಕ್ಕೆ ಎಐಸಿಸಿ ಒಪ್ಪಿಗೆ ನೀಡಿದೆ  ಎಂದು ಒಪಿಸಿಸಿ ಶಿಸ್ತುಸಮಿತಿಯ ಸಂಚಾಲಕ ಅನಂತ ಪ್ರಸಾದ್ ಸೆಥಿ ತಿಳಿಸಿದ್ದಾರೆ.

ಕಳೆದ ಯುಪಿಎ ಸರಕಾರದ ಅವಧಿಯಲ್ಲಿ ಜೇನಾ ಅವರು ಕೇಂದ್ರ ಸಚಿವರಾಗಿದ್ದರು. ದಲಿತ ನಾಯಕರಾಗಿದ್ದ ಸಾಗರಿಯಾ ಅವರು ಕೋರಪುಟ್‌ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News