ಶಿವಕುಮಾರ ಸ್ವಾಮಿ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಂತಾಪ
Update: 2019-01-21 14:19 GMT
ಬೆಂಗಳೂರು, ಜ. 21: ಸಿದ್ಧಗಂಗೆಯ ಸಿದ್ಧಪುರುಷ, ಧ್ಯೇಯ ತಪಸ್ವಿ, ಕಾರುಣ್ಯ ಚೇತನ, ನಡೆನುಡಿಯ ಕಲ್ಪವೃಕ್ಷ ಶಿವಕಾರಣ್ಯ ಸ್ವರೂಪಿಗಳಾಗಿದ್ದ ಡಾ.ಶಿವಕುಮಾರ ಸ್ವಾಮಿ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಾತಿ ಭೇದವಿಲ್ಲದೆ, ನಾಡಿನ ಸಹಸ್ರಾರು ಬಡ ಮಕ್ಕಳ ಪಾಲನ ದೇವರಾಗಿ, ಅನ್ನದಾನಿಯಾಗಿ, ಜ್ಞಾನದಾನಿಯಾಗಿ, ಅಗಣಿತರ ಬಾಳು ಬೆಳಗಿದ ಸಿದ್ಧಪುರುಷರಿಗೆ ಶರಣು ಶರಣಾರ್ಥಿಗಳು ಎಂದು ಈಶ್ವರ್ ಬಿ.ಖಂಡ್ರೆ ಹೇಳಿದ್ದಾರೆ.
ಇಚ್ಛಾಮರಣಿಗಳಾಗಿ ಇಂದು ಶಿವನಪಾದ ಸೇರಿದ ಅನಂತ ಚೇತನದ ಬೆಳಗು. ನಮ್ಮ ದಾರಿದೀಪವಾಗಲಿ. ಅವರು ನಡೆಸಿಕೊಟ್ಟ ದಿವ್ಯಪರಂಪರೆ ಮುಂದುವರಿಸಲು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಈಶ್ವರ್ ಬಿ.ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.