ಜೂಜಾಟ ಅಡ್ಡೆ ಮೇಲೆ ಸಿಸಿಬಿ ದಾಳಿ: 8 ಜನರ ಬಂಧನ
Update: 2019-01-21 16:07 GMT
ಬೆಂಗಳೂರು, ಜ.21: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ ಎಂಟು ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 52 ಸಾವಿರ ನಗರದ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಟಿ.ಆರ್.ಕೃಷ್ಣ, ನಾರಾಯಣ, ವೆಂಕಟರಾಮರೆಡ್ಡಿ, ರಮೇಶ್.ಎಂ, ಪ್ರಭುದೇವ್ ರಮೇಶ್.ಆರ್, ಮಹಾದೇವ್, ಮೋಹನ್ ಕುಮಾರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ನಗರದ ಕೆಂಗೇರಿ ರಿಂಗ್ ರಸ್ತೆಯ ವಿವಿ ವೃತ್ತದ ಬಳಿಯ ಮನೆಯಲ್ಲಿ ಸುಮಾರು 7 ರಿಂದ 8 ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರ ವಶದಿಂದ ಜೂಜಾಟಕ್ಕೆ ಸಂಬಂಧಿಸಿದಂತೆ ಒಟ್ಟು 52 ಸಾವಿರ ನಗದು 52 ಇಸ್ಪೀಟ್ ಎಲೆಗಳು, ಒಂದು ಕಂಬಳಿಯನ್ನು ಜಪ್ತಿ ಮಾಡಿ, ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.