ಸಿದ್ಧಗಂಗಾ ಶ್ರೀ ನಿಧನ: ಜ.22ರಂದು ಕೋರ್ಟ್ಗಳಿಗೆ ರಜೆ ಘೋಷಣೆ
Update: 2019-01-21 16:11 GMT
ಬೆಂಗಳೂರು, ಜ.21: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಿಧನರಾದ ಹಿನ್ನೆಲೆಯಲ್ಲಿ ಜನವರಿ 22(ಮಂಗಳವಾರ) ರಾಜ್ಯದ ಎಲ್ಲ ಕೋರ್ಟ್ಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳು ಮತ್ತು ಅಧೀನ ನ್ಯಾಯಾಲಯಗಳಿಗೆ ರಜೆ ಘೋಷಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಆದೇಶದನುಸಾರ ರಿಜಿಸ್ಟ್ರಾರ್ ಜನರಲ್ ಪಿ.ಎನ್.ದೇಸಾಯಿ ಸುತ್ತೋಲೆ ಹೊರಡಿಸಿದ್ದಾರೆ.