ಸಿದ್ದಗಂಗಾ ಶ್ರೀ ನಿಧನ: ಶಾಸಕ ತನ್ವೀರ್ ಸೇಠ್ ಸಂತಾಪ

Update: 2019-01-21 17:44 GMT

ಬೆಂಗಳೂರು, ಜ. 21: ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಸಂತಾಪ ಸೂಚಿಸಿದ್ದಾರೆ.

ಮಹಾನ್ ಮಾನವತಾವಾದಿ ಡಾ. ಶ್ರೀ ಶಿವಕುಮಾರಸ್ವಾಮಿ ನಿಧನ ನಾಡಿಗೆ ಅಪಾರ ನಷ್ಟವನ್ನುಂಟು ಮಾಡಿದೆ. ಅವರು ಜೀವಮಾನದ ಕೊನೆಯ ಘಳಿಗೆಯವರೆಗೂ ತಮ್ಮ ಸೇವಾ ತತ್ಪರತೆಯನ್ನು ಅನನ್ಯವಾಗಿ ಪಾಲಿಸಿದ್ದಾರೆ. ಈ ಮಹಾ ಪುರುಷರ ಬದುಕು ಮಾನವ ಕುಲಕ್ಕೆ ಮಾದರಿ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News