ಎಸ್ಸೈ ಪತ್ನಿಯ ಚಿನ್ನಾಭರಣವಿದ್ದ ಪರ್ಸ್ ಕಳವು

Update: 2019-01-23 16:11 GMT

ಬೆಂಗಳೂರು, ಜ.23: ದೇವಾಲಯಕ್ಕೆ ಹೋಗಿದ್ದ ಎಸ್ಸೈಯೊಬ್ಬರ ಪತ್ನಿಯ ಚಿನ್ನಾಭರಣವಿದ್ದ ಪರ್ಸ್ ಅನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬನಶಂಕರಿಯ ದೇವಸ್ಥಾನದಲ್ಲಿ ವಿವಿ ಪುರಂ ಸಂಚಾರ ಠಾಣೆಯ ಎಸ್ಸೈ ಡಿ. ರಮೇಶ್ ಪತ್ನಿ ಗೀತಾ ಅವರು ನಾಲ್ಕು ಮಂದಿ ಪೊಲೀಸ್ ಅಧಿಕಾರಿಗಳ ಪತ್ನಿಯರ ಜೊತೆ ದೇಗುಲಕ್ಕೆ ಹೋಗಿದ್ದಾರೆ. ಎಲ್ಲರೂ ಒಬ್ಬರ ಹಿಂದೆ ಒಬ್ಬರಂತೆ ದೇವಸ್ಥಾನಕ್ಕೆ ಪ್ರವೇಶಿಸಿ ದೇವರ ದರ್ಶನ ಮಾಡಿಕೊಂಡು ಹೊರ ಬರುವಾಗ ಗೀತಾ ಅವರ ಪರ್ಸ್ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.

ಪರ್ಸ್‌ನಲ್ಲಿದ್ದ 12 ಗ್ರಾಂ ತೂಕದ ಒಂದು ಚಿನ್ನದ ಬಳೆ ಹಾಗೂ 8 ಗ್ರಾಂ ತೂಕ ಸರ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News