ಹಿಂದೂ ಹುಡುಗಿಯನ್ನು ಮುಟ್ಟುವ ಕೈಗಳು ಇರಬಾರದು: ವಿವಾದ ಸೃಷ್ಟಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆ

Update: 2019-01-27 16:22 GMT

ಹೊಸದಿಲ್ಲಿ, ಜ.27: ಹಿಂದೂ ಹುಡುಗಿಯನ್ನು ಮುಟ್ಟುವ ಯಾವ ಕೈಯನ್ನಾದರೂ ಕಡಿಯಬೇಕು ಎಂದು ಹೇಳುವ ಮೂಲಕ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೊಸ ವಿವಾದ ಸೃಷ್ಟಿಸಿದ್ದಾರೆ.

“ನಮ್ಮ ಆಲೋಚನೆಗಳಲ್ಲಿ ಮೂಲಭೂತ ಬದಲಾವಣೆಗಳಾಗಬೇಕು. ನಮ್ಮ ನಡುವೆ ಏನು ನಡೆಯುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು. ಜಾತಿ ಯಾವುದೇ ಇರಲಿ ಹುಡುಗಿಯರನ್ನು ಮುಟ್ಟುವ ಕೈಗಳು ಇರಬಾರದು” ಎಂದು ಸಚಿವರು ಹೇಳಿದರು.

ಈ ಹಿಂದೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎಂಬ ಹೇಳಿಕೆ ನೀಡಿದ ಹೆಗಡೆ ವಿವಾದ ಸೃಷ್ಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News