ಸಣ್ಣ ರೈತರ ಖಾತೆಗೆ ನೇರವಾಗಿ 6,000 ರೂ.ವರ್ಗಾವಣೆ: ಪಿಯೂಷ್ ಗೋಯೆಲ್

Update: 2019-02-01 07:20 GMT

ಹೊಸದಿಲ್ಲಿ, ಫೆ.1: ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಎನ್‌ಡಿಎ ಸರಕಾರದ 2019-20ರ ಬಜೆಟ್ ಮುಖ್ಯಾಂಶಗಳು.

 *ಆದಾಯ ತೆರಿಗೆ ಪಾವತಿದಾರರಿಗೆ ರಿಲೀಫ್, ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ. 5 ಲಕ್ಷ ರೂ.ಆದಾಯವಿರುವವರು ತೆರಿಗೆಯಿಂದ ಮುಕ್ತ.

*ಉದ್ಯೋಗ ಖಾತ್ರಿ ಯೋಜನೆಗೆ 60,000 ಕೋ.ರೂ. ಮೀಸಲು, ಅಗತ್ಯವೆನಿಸಿದರೆ ಮತ್ತಷ್ಟು ಹೆಚ್ಚಳ.

 *ನೋಟು ರದ್ದತಿ ಬಳಿಕ ಕಪ್ಪು ಹಣ ಸಂಗ್ರಹ ಅನಾವರಣ, 1.30 ಲಕ್ಷ ಕೋಟಿ ರೂ. ಅಘೋಷಿತ ಆದಾಯ ಪತ್ತೆ. 3.38 ಲಕ್ಷ ಶೆಲ್ ಕಂಪೆನಿಗಳು ರದ್ದು.

*ಸಂಚಾರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಕ್ರಮ, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಕ್ರಮ

*ಸಾಗರಮಾಲಾ ಯೋಜನೆ ಮೂಲಕ ಹೊಸ ಅವಕಾಶ

*ಗಗನ ಯಾನ ಯೋಜನೆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ

*ರಾಷ್ಟ್ರೀಯ ಶಿಕ್ಷಣ ಯೋಜನೆಗೆ 38,572 ಕೋ.ರೂ. ಮೀಸಲು

*ಎಸ್‌ಟಿ ವರ್ಗಕ್ಕೆ 50,000 ಕೋ.ರೂ., ಎಸ್‌ಸಿ ವರ್ಗಕ್ಕೆ 76,000 ಕೋ.ರೂ. ಅನುದಾನ

* ಉಳಿತಾಯ ಯೋಜನೆಗಳ ಹೂಡಿಕೆಗೆ ತೆರಿಗೆ ವಿನಾಯಿತಿ.

*ಗೃಹ ಸಾಲ 2 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ

* ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗೆ ನೇರವಾಗಿ ವಾರ್ಷಿಕ 6,000 ರೂ.ವರ್ಗಾವಣೆ. ಮೂರು ಹಂತಗಳಲ್ಲಿ ರೈತರಿಗೆ ಹಣ ತಲುಪಲಿದೆ.

*2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯ

*ಕಿಸಾನ್ ಸಮ್ಮಾನ್ ಯೋಜನೆ 12 ಕೋಟಿ ರೈತರಿಗೆ ಲಾಭ, ಯೋಜನೆಗೆ 75,000 ಕೋ.ರೂ. ಮೀಸಲು

* ಪಶುಪಾಲನೆ, ಮೀನುಗಾರಿಕೆ ಯೋಜನೆಗೆ 700 ಕೋ.ರೂ.

*ಜಾನುವಾರು ಸಾಕಣೆಗೆ ಸಂಪೂರ್ಣ ನೆರವು

* ರೈತರ ಬೆಂಬಲ ಬೆಲೆ ಕನಿಷ್ಠ 1.5ರಷ್ಟು ಹೆಚ್ಚಳ

*ಬೀದಿಬದಿ ವ್ಯಾಪಾರಿ, ರಿಕ್ಷಾವಾಲಾಗೆ ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಂದಾನ್ ಪಿಂಚಣಿ ಯೋಜನೆ

*ಪ್ರತಿ ತಿಂಗಳು 100 ರೂ.ಕಟ್ಟುವ ಮೂಲಕ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. 60 ವರ್ಷದ ಬಳಿಕ ಪ್ರತಿ ತಿಂಗಳು 3,000 ರೂ.ಪಿಂಚಣಿ ಸೌಲಭ್ಯ

*ರಕ್ಷಣಾ ವಲಯಕ್ಕೆ 3 ಲಕ್ಷ ಕೋಟಿ. ರೂ.ಗೂ ಅಧಿಕ ಮೊತ್ತ ಮೀಸಲು

*ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಮೊಬೈಲ್ ತಯಾರಿಕೆ

* ಮೊಬೈಲ್ ಡಾಟಾ ಬಳಕೆ ಶೇ.50ರಷ್ಟು ಹೆಚ್ಚಳ

* ತೆರಿಗೆ ಪಾವತಿಗೆ 24 ಗಂಟೆ ಆನ್‌ಲೈನ್ ಸೇವೆ

*260 ಮೊಬೈಲ್ ಉತ್ಪಾದನಾ ಕಂಪೆನಿಗಳು ಆರಂಭವಾಗಲಿವೆ

*ಶೇ.99.94ರಷ್ಟು ತೆರಿಗೆ ಪಾವತಿ

*ಗೋವುಗಳ ರಕ್ಷಣೆಗಾಗಿ ‘ರಾಷ್ಟ್ರೀಯ ಕಾಮಧೇನು ಆಯೋಗ’

2020ರ ವೇಳೆ ನವಭಾರತ ನಿರ್ಮಾಣ

* ವಿದೇಶಿ ನೇರ ಹೂಡಿಕೆ(ಎಫ್‌ಡಿಎ) ಪ್ರಮಾಣ ಹೆಚ್ಚಳ

* ರೇರಾ ಕಾಯ್ದೆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ

*ಕಲ್ಲಿದ್ದಲು, ತರಂಗಾಂತರ ಸರಿಯಾದ ಬಳಕೆ

*ಎಸ್‌ಸಿ-ಎಸ್ಟಿ ಮೀಸಲಾತಿ ಅಭಿವೃದ್ಧಿ

*ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ

* ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿ ರಸ್ತೆ ನಿರ್ಮಾಣ

*ವಿದ್ಯುತ್ ಉಳಿತಾಯಕ್ಕಾಗಿ ಎಲ್‌ಇಡಿ ಬಲ್ಬ್

*ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ

*22ನೇ ಏಮ್ಸ್ ಹರ್ಯಾಣದಲ್ಲಿ ನಿರ್ಮಾಣವಾಗಲಿದೆ

*50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಮೂಲಕ ಚಿಕಿತ್ಸೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News