ವಿಮರ್ಶಾ ಪ್ರಶಸ್ತಿಗೆ ನರಹಳ್ಳಿ, ಮಾಧ್ಯಮ ಪ್ರಶಸ್ತಿಗೆ ಜಾಣಗೆರೆ ಆಯ್ಕೆ

Update: 2019-02-04 17:02 GMT

ಬೆಂಗಳೂರು, ಫೆ.4: ಬಿಎಂಶ್ರೀ ಪ್ರತಿಷ್ಠಾನದ 2019 ನೆ ಸಾಲಿನ ಪ್ರೊ.ಎಲ್.ಎಸ್. ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿಗೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿಗೆ ಜಾಣಗೆರೆ ವೆಂಕಟರಾಮಯ್ಯ ಆಯ್ಕೆಯಾಗಿದ್ದಾರೆ.

ಡಾ.ಮಂಗಳಾ ಪ್ರಿಯದರ್ಶಿನಿ ಹಾಗೂ ಎಸ್.ಆರ್.ವಿಜಯಶಂಕರ್ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯರನ್ನು ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿಗೆ, ಪತ್ರಕರ್ತ ಪ್ರೇಮ್‌ ಕುಮಾರ್ ಹರಿಯಬ್ಬೆ ಹಾಗೂ ಶ್ರೀವತ್ಸ ನಾಡಿಗ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿಗೆ ಜಾಣಗೆರೆ ವೆಂಕಟರಾಮಯ್ಯರನ್ನು ಆಯ್ಕೆ ಮಾಡಿದೆ.

ಎರಡು ಪ್ರಶಸ್ತಿಗಳು ತಲಾ 10 ಸಾವಿರ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತವೆ. ಅಲ್ಲದೆ, ಸುರೇಖಾ ಕುಲಕರ್ಣಿ ಅವರ ಕಾದಂಬರಿಕಾರನ ಕಾದಂಬರಿ ಕೃತಿಗೆ ದಿ.ಸಾರಂಗಿ ವೆಂಕಟರಾಮಯ್ಯ-ಪುಟ್ಟಚ್ಚಮ್ಮ ಪುಸ್ತಕ ಬಹುಮಾನ ಲಭಿಸಿದೆ. ಪ್ರಶಸ್ತಿಗಳನ್ನು ಫೆ.17ರಂದು ಬಿಎಂಶ್ರೀ ಪ್ರತಿಷ್ಠಾನದ ಎಂ.ವಿ.ಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News