ಅಬ್ದುಲ್ ರಹಿಮಾನ್ ನಿಧನ

Update: 2019-02-07 04:15 GMT

ಉಡುಪಿ, ಫೆ.7: ಇಲ್ಲಿನ ಜಾಮಿಯಾ ಮಸೀದಿಯ ಸಿಬ್ಬಂದಿ ಅಬ್ದುಲ್ ರಹಿಮಾನ್(72) ಅಲ್ಪಕಾಲದ ಅಸೌಖ್ಯದಿಂದ ಫೆ.6ರಂದು ಮಧ್ಯರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ದ.ಕ. ಜಿಲ್ಲೆಯ ಬಂಟ್ವಾಳ ಹಾಗೂ ಪ್ರಸ್ತುತ ಉಡುಪಿ ಕುಕ್ಕಿಕಟ್ಟೆಯ ನಿವಾಸಿಯಾಗಿದ್ದ ಇವರು, ಉಡುಪಿ ಮಸೀದಿಯಲ್ಲಿ ಸುಮಾರು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ