ಎರಡು ವಾಹನಗಳ ವೇಗದ ಪೈಪೋಟಿಗೆ ಬೈಕ್ ಸವಾರ ಬಲಿ

Update: 2019-02-07 16:23 GMT

ಬೆಂಗಳೂರು,ಫೆ.7: ಬಿಎಂಟಿಸಿ ಬಸ್ ಮತ್ತು ಬಾಷ್ ಕಂಪನಿ ವಾಹನಗಳ ಮಧ್ಯೆ ಪೈಪೋಟಿಯಲ್ಲಿ ಬೈಕ್ ಸವಾರ ಸಿಲುಕಿ ಸಾವನ್ನಪ್ಪಿರುವ ಘಟನೆ ಬಿಡದಿಯ ಪಿಚ್ಚಗುಂಟರಪಾಳ್ಯದ ಬಳಿ ನಡೆದಿದೆ.

ಕೊಡಿಯಾಲ ಕರೇನಹಳ್ಳಿಯ ವೆಂಕಟೇಶಮೂರ್ತಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬಿಎಂಟಿಸಿ ಬಸ್ ಹಾಗೂ ಕಾರ್ಮಿಕರನ್ನು ಕರೆದೊಯ್ಯುವ ಕಂಪನಿ ವಾಹನಗಳು ವೇಗದ ಪೈಪೋಟಿಗಿಳಿದಿದ್ದವು. ಈ ಸಂದರ್ಭದಲ್ಲಿ ಕೊಡಿಯಾಲ ಕರೇನಹಳ್ಳಿಯಿಂದ ಕಾಡು ಮನೆಗೆ ತೆರಳುತ್ತಿದ್ದ ಬೈಕ್ ಸವಾರ ವೆಂಕಟೇಶಮೂರ್ತಿ ಎರಡು ವಾಹನ ನಡುವೆ ಸಿಕ್ಕಿಹಾಕಿಕೊಂಡ ಪರಿಣಾಮ ಕೆಳಕ್ಕೆ ಬಿದ್ದಿದ್ದಾರೆ. ಕೂಡಲೇ ಅವರ ಮೇಲೆ ಬಸ್ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಘಟನಾ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಾಷ್ ಕಂಪನಿ ಮತ್ತು ಬಿಎಂಟಿಸಿ ವಾಹನ ಚಾಲಕರನ್ನು ಬಂಧಿಸುವಂತೆ ಸ್ಥಳಿಯರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News