ಬೈಕ್‌ನಲ್ಲಿದ್ದ 1 ಲಕ್ಷ ದೋಚಿದ ಕಳ್ಳರು

Update: 2019-02-09 17:03 GMT

ಬೆಂಗಳೂರು, ಫೆ.9: ಬ್ಯಾಂಕ್‌ನಿಂದ ಹಣ ಪಡೆದು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಬ್ಯಾಗ್‌ನಲ್ಲಿಟ್ಟು ಹೋಗಿದ್ದ ವ್ಯಕಿಯೊಬ್ಬರ 1 ಲಕ್ಷ ಹಣವನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೇಗೂರಿನ ಕೆನರಾ ಬ್ಯಾಂಕ್ ಶಾಖೆಯಿಂದ ಪಿಳ್ಳಪ್ಪ ಎಂಬುವರು ಶುಕ್ರವಾರ ಮಧ್ಯಾಹ್ನ 1 ಲಕ್ಷ ಹಣ ಪಡೆದುಕೊಂಡು ಅದನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲಿನ ಬ್ಯಾಗ್‌ನಲ್ಲಿಟ್ಟು ಹೋಗುತ್ತಿದ್ದರು ಎನ್ನಲಾಗಿದೆ.

ಈ ವೇಳೆ ದುಷ್ಕರ್ಮಿಯೊಬ್ಬ ಹೆಲ್ಮೆಟ್ ಧರಿಸಿ ಬಂದು ಬೈಕಿನಲ್ಲಿದ್ದ 1 ಲಕ್ಷ ರೂ. ದೋಚಿ ಮತ್ತೊಬ್ಬ ಆರೋಪಿಯ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಕ್ಷಣಾರ್ಧದಲ್ಲಿ ಈ ಕೃತ್ಯ ನಡೆದಿದ್ದು, ಸಿಸಿ ಕ್ಯಾಮಾರದಲ್ಲಿ ದುಷ್ಕರ್ಮಿಗಳ ಕೈಚಳಕ ಸೆರಯಾಗಿದೆ.

ಈ ಸಂಬಂಧ ದೂರು ದಾಖಲಿಸಿರುವ ಬೇಗೂರು ಪೊಲೀಸರು ದುಷ್ಕರ್ಮಿ ಗಳಿಗಾಗಿ ಶೋಧ ನಡೆಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News