ನನ್ನ ಕೊಡುಗೆ ಏನೆಂದು ದಿಲ್ಲಿಯಲ್ಲೇ ಮೋದಿಗೆ ಉತ್ತರಿಸುವೆ: ಎಚ್.ಡಿ.ದೇವೇಗೌಡ

Update: 2019-02-10 13:15 GMT

ಬೆಂಗಳೂರು, ಫೆ. 10: ತಾನು ಕಳೆದ 58 ವರ್ಷಗಳಲ್ಲಿ ಕರ್ನಾಟಕ ರಾಜ್ಯ ಮತ್ತು ರಾಷ್ಟ್ರಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದನ್ನು ಹೊಸದಿಲ್ಲಿಯಲ್ಲಿ ಪ್ರಧಾನಿ ಮೋದಿಯವರಿಗೆ ಉತ್ತರ ನೀಡಲಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವೇಗೌಡರು ಸೋಕಾಲ್ಡ್ ಮಣ್ಣಿನ ಮಗ, ಅವರು ರೈತರಿಗಾಗಿ ಏನು ಮಾಡಿದ್ದಾರೆ? ಅವರ ಮಗ ಏನು ಮಾಡಿದ್ದಾರೆ’ ಎಂದು ಮೋದಿ ಲಘುವಾಗಿ ಮಾತನಾಡಿದ್ದು, ಅವರ ಟೀಕೆಗೆ ತಕ್ಕ ಉತ್ತರ ನೀಡುವೆ ಎಂದು ತಿರುಗೇಟು ನೀಡಿದರು.

ತಮ್ಮ ರಾಜಕೀಯ ಜೀವನದಲ್ಲಿ ರೈತರು, ನೀರಾವರಿಗಾಗಿ ಏನೇನು ಮಾಡಿದ್ದೇನೆ. ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ದಿಗೆ ತನ್ನ ಕೊಡುಗೆ ಏನೆಂಬುದನ್ನು ಮನವರಿಕೆ ಮಾಡಿಕೊಡುವೆ ಎಂದ ಅವರು, ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ‘ಆಪರೇಷನ್ ಕಮಲ’ ಆಡಿಯೋ ಬಿಡುಗಡೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News