ಜೂಜಾಟದಲ್ಲಿ ಹಣ ಕಳೆದುಕೊಂಡ ಮಗನ ಮೇಲೆ ಹಲ್ಲೆ ನಡೆಸಿದ ತಂದೆ

Update: 2019-02-10 14:03 GMT

ಬೆಂಗಳೂರು, ಫೆ. 10: ಜೂಜಾಟದಲ್ಲಿ ಹಣ ಕಳೆದುಕೊಂಡ ಮಗನ ಮೇಲೆ ತಂದೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಗಿರಿನಗರದ ದ್ವಾರಕ ನಗರದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಆಟೊ ಚಾಲಕ ಸಂತೋಷ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಜೂಜಾಟದಲ್ಲಿ ಸಂತೋಷ್ 1 ಲಕ್ಷ ರೂ. ಕಳೆದುಕೊಂಡಿದ್ದರಿಂದ ಆಕ್ರೋಶಗೊಂಡ ತಂದೆ ರಾಜಣ್ಣ ಬೀಗದ ಕೈನಿಂದ ತಲೆಗೆ ಚುಚ್ಚಿದ್ದಾರೆ. ಆಳಕ್ಕೆ ಕೀ ಇಳಿದು ರಕ್ತ ಸೋರುತ್ತಿದ್ದ ಸಂತೋಷ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News