ಶಾಸಕರ ಖರೀದಿ ನಿಲ್ಲಿಸಲು ಆಡಿಯೋ ಪ್ರಕರಣ ‘ಸಿಟ್’ಗೆ: ಮುಖ್ಯಮಂತ್ರಿ ಕುಮಾರಸ್ವಾಮಿ
Update: 2019-02-13 15:59 GMT
ಬೆಂಗಳೂರು, ಫೆ. 14: ರಾಜ್ಯದಲ್ಲಿ ಶಾಸಕರ ಖರೀದಿಯ ವಸ್ತುಗಳೆಂಬ ಭಾವನೆ ಅತ್ಯಂತ ಅಪಾಯಕಾರಿ. ಶಾಸಕರ ಖರೀದಿಯನ್ನು ಶಾಶ್ವತವಾಗಿ ನಿಲ್ಲಿಸುವ ದೃಷ್ಟಿಯಿಂದ ಆಡಿಯೋ ಪ್ರಕರಣವನ್ನು ವಿಶೇಷ ತನಿಖಾ ತಂಡ(ಸಿಟ್)ಕ್ಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಟ್ಗೆ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ನಿಷ್ಪಕ್ಷಪಾತವಾಗಿ ಸಿಟ್ ತನಿಖೆ ನಡೆಯಲಿದೆ. ಯಾವುದೇ ಪ್ರಭಾವಕ್ಕೆ ಒಳಗಾಗಬೇಡಿ ಎಂದು ನಾನೇ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸ್ವತಃ ಮುಖ್ಯಮಂತ್ರಿಯಾಗಿರುವ ನನ್ನ ಪ್ರಭಾವಕ್ಕೂ ಅಧಿಕಾರಿಗಳು ಒಳಗಾಗಲ್ಲ ಎಂದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದಲ್ಲಿ ಶಾಸಕ ಖರೀದಿ ಪ್ರಕರಣ ಇನ್ನೆಂದು ಮರುಕಳಿಸದಂತೆ ಸಮಗ್ರ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸುವೆ ಎಂದು ಹೇಳಿದರು.