ಕೆಎಸ್ಸಾರ್ಟಿಸಿ: ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ

Update: 2019-02-13 16:08 GMT

ಬೆಂಗಳೂರು, ಫೆ.13: ಕೆಎಸ್ಸಾರ್ಟಿಸಿ ವತಿಯಿಂದ ಇದೇ ಪ್ರಪ್ರಥಮವಾಗಿ 2016-17ನೇ ರಲ್ಲಿ 8 ನಿರ್ವಾಹಕರಿಗೆ ಮತ್ತು 4 ಚಾಲಕ ಕಂ ನಿರ್ವಾಹಕರಿಗೆ ಹಾಗೂ 2017-18ರಲ್ಲಿ 23 ನಿರ್ವಾಹಕರಿಗೆ ಮತ್ತು 3 ಚಾಲಕ ಕಂ ನಿರ್ವಾಹಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.

ಬುಧವಾರ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಿ, ನಿಗಮದ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಇನ್ನೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಬೆಳ್ಳಿ ಪದಕವು 32ಗ್ರಾಂ ಬೆಳ್ಳಿಯನ್ನು ಹೊಂದಿರುತ್ತದೆ. ನಿರ್ವಾಹಕ ಮತ್ತು ಚಾಲಕ ಕಂ ನಿರ್ವಾಹಕರು ಬೆಳ್ಳಿ ಪದಕ ಪಡೆದ ನಂತರ ಸತತವಾಗಿ 5 ವರ್ಷ ಅರ್ಹತಾ ಪುರಸ್ಕಾರಕ್ಕೆ ಅರ್ಹರಾದಲ್ಲಿ, ಚಿನ್ನದ ಪದಕ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ನಿರ್ದೇಶಕ ಶಿವಪ್ರಸಾದ್ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News