ಮಡಿದ ಯೋಧ ಗುರುಗೆ ಬಿಬಿಎಂಪಿ ಸದಸ್ಯರ ತಿಂಗಳ ಗೌರವಧನ
Update: 2019-02-15 16:12 GMT
ಬೆಂಗಳೂರು,ಫೆ.15: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೋರದಲ್ಲಿ ನಡೆದ ಉಗ್ರರ ಅಟ್ಟಹಾಸದಲ್ಲಿ ಹುತಾತ್ಮರಾದ ಯೋಧರಿಗೆ ಬಿಬಿಎಂಪಿಯಿಂದ ಗೌರವ ಸಲ್ಲಿಸಲಾಯಿತು.
ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಲ್ಲಿ ರಾಜ್ಯದ ವೀರ ಯೋಧ ಗುರು ಎಂಬುವರು ಹುತಾತ್ಮರಾಗಿದ್ದಾರೆ. ವೀರ ಯೋಧ ಗುರು ಅವರಿಗೆ ಆರ್ಥಿಕ ಸಹಾಯ ನೀಡಲು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ನಿರ್ಧರಿಸಿದ್ದು, ಪಾಲಿಕೆ ಸದಸ್ಯರ ತಿಂಗಳ ಗೌರವಧನ ನೀಡಲು ತೀರ್ಮಾನಿಸಲಾಗಿದೆ. ಈ ಮೂಲಕ ಹುತಾತ್ಮ ಯೋಧನಿಗೆ ವಿಶೇಷ ಗೌರವ ಸಲ್ಲಿಸಲು ಬಿಬಿಎಂಪಿ ಮುಂದಾಗಿದೆ.