ಹುತಾತ್ಮ ಯೋಧರಿಗೆ ಎಐಟಿಯುಸಿಯಿಂದ ಶ್ರದ್ಧಾಂಜಲಿ

Update: 2019-02-15 16:33 GMT

ಬೆಂಗಳೂರು, ಫೆ.15: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಪಡೆಯ ಯೋಧರಿಗೆ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿ ಹಾಗೂ ಎಐಟಿಯುಸಿ ರಾಜ್ಯ ಸಮಿತಿಯು ಶ್ರದ್ಧಾಂಜಲಿ ಸಲ್ಲಿಸಿತು.

ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಚ್.ಅನಂತಸುಬ್ಬರಾವ್ ಮಾತನಾಡಿ, ಕೇಂದ್ರ ಸರಕಾರವು ಕಾಶ್ಮೀರದ ಸಮಸ್ಯೆಯನ್ನು ಪೆಲೆಟ್ ಗನ್ ಮೂಲಕ ಬಗೆಹರಿಸಬಹುದಾದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದು ಪರಿಗಣಿಸಿರುವುದು ತಪ್ಪು, ಕಾಶ್ಮೀರ ನೀತಿಯೇ ಇಂತಹ ಪರಿಸ್ಥಿತಿಗೆ ಮೂಲ ಕಾರಣ ಎಂದರು. ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಮಂಡಳಿ ಖಜಾಂಚಿ ಡಿ.ಎ.ಜಯಭಾಸ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News