‘ಕಪಿಲ್ ಶರ್ಮಾ ಶೋ'ನಿಂದ ನವಜೋತ್ ಸಿಂಗ್ ಸಿಧು ಹೊರಕ್ಕೆ

Update: 2019-02-16 11:34 GMT

ಹೊಸದಿಲ್ಲಿ, ಫೆ.16: ಪುಲ್ವಾಮ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ‘ಕಪಿಲ್ ಶರ್ಮಾ’ ಶೋ ತೊರೆಯುವಂತೆ ನವ್ ಜೋತ್ ಸಿಂಗ್ ಸಿಧುಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

“ಅವರ ಹೇಳಿಕೆ ವಿವಾದ ಸೃಷ್ಟಿಸಿದೆ. ಈ ವಿವಾದಕ್ಕೆ ಚಾನೆಲ್ ಹೆಸರು ಮತ್ತು ಶೋ ಹೆಸರನ್ನು ಎಳೆದು ತರಲಾಗಿದೆ. ಈ ಹಿನ್ನೆಲೆಯಲ್ಲಿ ಸಿಧು ಶೋನಿಂದ ದೂರ ಉಳಿಯಬೇಕು ಎಂದು ತಂಡವು ಬಯಸಿದೆ” ಎಂದು ತಂಡದ ಸದಸ್ಯರೊಬ್ಬರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಪುಲ್ವಾಮ ದಾಳಿಗೆ ಸಂಬಂಧಿಸಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಅವರು, “ಕೆಲವರ ಕೃತ್ಯಗಳಿಗಾಗಿ ಒಂದು ದೇಶವನ್ನು ದೂರಲು ಸಾಧ್ಯವೇ?” ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಪ್ರಶ್ನಿಸಿದ್ದರು. ಸಿಧು ಅವರ ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News