ನಿವೇಶನ ಮರು ಹಂಚಿಕೆ ತಕರಾರು ಅರ್ಜಿ ಇತ್ಯರ್ಥಕ್ಕೆ 10 ಲಕ್ಷ ರೂ. ಲಂಚ: ಬಿಡಿಎ ಸರ್ವೆಯರ್ ಎಸಿಬಿ ಬಲೆಗೆ
Update: 2019-02-23 17:52 GMT
ಬೆಂಗಳೂರು, ಫೆ. 23: ನಿವೇಶನದ ಮರು ಹಂಚಿಕೆ ಮತ್ತು ಮರು ಮಂಜೂರಾತಿ ಪ್ರಕ್ರಿಯೆ ಸಮಯದಲ್ಲಿ ಬಂದಿರುವ ತಕರಾರು ಅರ್ಜಿಯನ್ನು ಇತ್ಯರ್ಥಪಡಿಸುವ ಸಲುವಾಗಿ ಬಿಡಿಎ ಸರ್ವೆಯರ್ ಬಸವರಾಜು 10ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಹಣವನ್ನು ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದಿದ್ದಾರೆ.
ಸರ್ವೆಯರ್ ಬಸವರಾಜು ಪರವಾಗಿ ಖಾಸಗಿ ವ್ಯಕ್ತಿ ಬಸವರಾಜು ಎಂಬವರು ಬಿಡಿಎ ಕೇಂದ್ರ ಕಚೇರಿಯಲ್ಲಿ 5 ಲಕ್ಷ ರೂ.ನಗದು ಮತ್ತು 5 ಲಕ್ಷ ರೂ.ಚೆಕ್ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದಿದ್ದಾರೆ. ಇಬ್ಬರನ್ನು ಬಂಧಿಸಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ತಿಳಿಸಿದೆ.