ಯಾರ ಮೇಲೆ ಯಾರೂ ಬಾಂಬ್ ಹಾಕುವುದು ಸಲ್ಲ: ಸಚಿವ ಎಂ.ಸಿ.ಮನಗೂಳಿ

Update: 2019-02-27 16:39 GMT

ಬಾಗಲಕೋಟೆ, ಫೆ. 27: ಮಾನವೀಯ ದೃಷ್ಟಿಯಿಂದ ಯಾರ ಮೇಲೆಯೂ ಬಾಂಬ್ ಹಾಕಬಾರದು. ಅವರ ಮೇಲೆ ಇವರು, ಇವರ ಮೇಲೆ ಅವರು ಬಾಂಬ್ ಹಾಕುವುದು ಸರಿಯಲ್ಲ ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರರ ಮೇಲೆ ಏರ್ ಸ್ಟ್ರೈಕ್ ಮಾಡಿದ ಯೋಧರೇ ಇರಲಿ, ಉಗ್ರಗಾಮಿಗಳೇ ಇರಲಿ, ಇದು ಆಗಬಾರದಾಗಿತ್ತು. ಆದರೂ, ನಡೆದಿದೆ. ಯಾರೂ ಯಾರ ಮೇಲೆಯೂ ಬಾಂಬ್ ಹಾಕಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News