ಕೃಷ್ಣಿ ಸುವರ್ಣ

Update: 2019-03-04 13:00 GMT

ಮೂಡುಬಿದಿರೆ: ಮುಂಡ್ಕೂರಿನ ಪೇರೂರು, ನಿವಾಸಿ ನಾಟಿ ವೈದ್ಯೆ ಕೃಷ್ಣಿ ಸುವರ್ಣ ಯಾನೆ ಕಿಟ್ಟಿ(92) ಅಲ್ಪಕಾಲದ ಅಸೌಖ್ಯದಿಂದ ಇತ್ತೀಚಿಗೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಅವರು ಮೂವರು ಪುತ್ರಿಯರು, ಓರ್ವ ಪುತ್ರರನ್ನು ಅಗಲಿದ್ದಾರೆ. ಗ್ರಾಮೀಣ ಭಾಗದ ನಾಟಿ ವೈದ್ಯೆಯಾಗಿ, ದೃಷ್ಟಿ ನಿವಾಳಿಸುವಲ್ಲಿ ಪರಿಣತೆಯಾಗಿದ್ದ ಅವರು ಗ್ರಾಮಾಂತರದ ಪರಿಸರದಲ್ಲಿ ತನ್ನ ಸೇವಾ ಕಾರ್ಯಗಳಿಗಾಗಿ ಹಲವು ಸಂಘ ಸಂಸ್ಥೆಗಳಿಂದ ಸಮ್ಮಾನಿತರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ