ವಾಹನ ಢಿಕ್ಕಿ: 4 ವರ್ಷದ ಬಾಲಕ ಮೃತ್ಯು

Update: 2019-03-04 14:43 GMT

ಬೆಂಗಳೂರು, ಮಾ.4: ವಸ್ತು ಸಾಗಾಟ ವಾಹನಯೊಂದು ಢಿಕ್ಕಿ ಹೊಡೆದ ಪರಿಣಾಮ 4 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಅಮೃತಹಳ್ಳಿಯಲ್ಲಿ ನಡೆದಿದೆ.

ವೀರಣ್ಣ ಪಾಳ್ಯದ ತೆಂಗಿನತೋಟದ ಕೂಲಿ ಕಾರ್ಮಿಕರ ಶೆಡನಲ್ಲಿ ವಾಸಿಸುತ್ತಿದ್ದ ರಮೇಶ್, ಚೈತ್ರಾ ದಂಪತಿಯ ಪುತ್ರ ನಾಗರಾಜ್ ಎಂಬಾತ ಮೃತ ಬಾಲಕ ಎಂದು ತಿಳಿದುಬಂದಿದೆ.

ಬಳ್ಳಾರಿ ಮೂಲದ ರಮೇಶ್ ಪತ್ನಿಯೊಂದಿಗೆ ರವಿವಾರ ಗಾರೆ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ 2:50 ರ ವೇಳೆಗೆ ಮನೆಯ ಮುಂಭಾಗದ ರಸ್ತೆಯಲ್ಲಿ ಆಟವಾಡುತ್ತಿದ್ದ ನಾಗರಾಜ್‌ನನ್ನು ಗಮನಿಸದೆ ಹಿಂದೆ ತೆಗೆದುಕೊಳ್ಳುತ್ತಿದ್ದ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್‌ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಸಂಚಾರಿ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಪರಾರಿಯಾಗಿರುವ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News