ಸುಮಲತಾರದ್ದು ಕುಟುಂಬ ರಾಜಕಾರಣವಲ್ಲವೇ: ವಿಧಾನ ಪರಿತ್ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆ

Update: 2019-03-12 13:34 GMT

ಬೆಂಗಳೂರು, ಮಾ.12: ಕೇಂದ್ರದ ಮಾಜಿ ಸಚಿವ ದಿವಗಂತ ಅಂಬರೀಷ್ ನಂತರ ಅವರ ಪತ್ನಿ ಸುಮಲತಾ ರಾಜಕೀಯಕ್ಕೆ ಬಂದಿರೋದು ಕುಟುಂಬ ರಾಜಕಾರಣ ಆಗುವುದಿಲ್ಲವೇ ಎಂದು ವಿಧಾನ ಪರಿಷತ್ತಿನ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆ ಮಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ ಕುಟುಂಬ ಸೇರಿ ಎಲ್ಲ ಕಡೆಗಳಲ್ಲೂ ಕುಟುಂಬ ರಾಜಕಾರಣ ಇದೆ. ಇನ್ನು ಅಂಬರೀಷ್ ನಂತರ ಸುಮಲತಾ ರಾಜಕೀಯಕ್ಕೆ ಬಂದಿರೋದು ಕುಟುಂಬ ರಾಜಕಾರಣ ಆಗುವುದಿಲ್ಲವೇ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿಖಿಲ್ ಕುಮಾರಸ್ವಾಮಿ ಅವರು ಆಯ್ಕೆ ಆಗಬೇಕು ಎಂದ ಅವರು, ಚಿತ್ರರಂಗದಿಂದ ಬಂದವರನ್ನು ನೋಡಿ ಸಾಕಾಗಿದೆ. ರಾಜಕೀಯಕ್ಕೆ ರಮ್ಯಾ ಬಂದಿದ್ದರು. ಅವರು ಎಷ್ಟರ ಮಟ್ಟಿಗೆ ನಮ್ಮ ಕೆಲಸ ಮಾಡಿಕೊಟ್ಟರು ಎಂಬುವುದು ಗೊತ್ತಾಗಿದೆ. ನಾವು ರಮ್ಯಾರಿಂದ ಪಾಠ ಕಲಿತಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News