ರಾಜ್ಯದ ನಾಲ್ಕೈದು ಸ್ಥಳಗಳಲ್ಲಿ ಮೋದಿ ರ‍್ಯಾಲಿ: ಆರ್.ಅಶೋಕ್

Update: 2019-03-13 13:09 GMT

ಬೆಂಗಳೂರು, ಮಾ. 13: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಅಲೆ ಬಿಜೆಪಿ ವರದಾನವಾಗಿದ್ದು, ರಾಜ್ಯದ ದಾವಣಗೆರೆ, ಮೈಸೂರು ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಮೋದಿ ನೇತೃತ್ವದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶಗಳನ್ನು ಏರ್ಪಡಿಸಲಾಗುವುದು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ನಿರ್ವಹಣೆಗೆ ಪಕ್ಷ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ನಾನು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಎನ್.ರವಿಕುಮಾರ್, ಸುಬ್ಬಣ್ಣ ಇದ್ದೇವೆ. ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಒಟ್ಟು 36 ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದರು.

ಮೋದಿ ನೇತೃತ್ವದ ಸರಕಾರ ಐದು ವರ್ಷಗಳ ಸಾಧನೆ ಮತ್ತು ಭಯೋತ್ಪಾದನೆ ವಿರುದ್ಧ ಕೇಂದ್ರ ಸರಕಾರ ಕೈಗೊಂಡ ಕ್ರಮಗಳನ್ನು ಚುನಾವಣೆಯಲ್ಲಿ ಪ್ರಚಾರ ಮಾಡುವ ಮೂಲಕ ಬಿಜೆಪಿ ಗೆಲುವು ಸಾಧಿಸಲಿದೆ. ಯಾವುದೇ ಸಿದ್ದಾಂತವಿಲ್ಲದ ವಿಪಕ್ಷಗಳ ಮಹಾಘಟ್ ಬಂಧನ್‌ಗೆ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News