ಬ್ಯಾರಿಸ್ ವೆಲ್ಫೇರ್ ಫೋರಂನಿಂದ ಸುಧೀರ್ ಕುಮಾರ್ ಶೆಟ್ಟಿಗೆ ಬೀಳ್ಕೊಡುಗೆ

Update: 2019-03-21 14:38 GMT

ಅಬುಧಾಬಿ, ಮಾ. 21: ಬ್ಯಾರಿಸ್ ವೆಲ್ಫೇರ್ ಫೋರಂ, ಅಬುಧಾಬಿ ಮತ್ತು ಭಾರತೀಯ ಇಸ್ಲಾಮಿಕ್ ಕೇಂದ್ರ ಹಾಗೂ ಇತರ ಸಾಮಾಜಿ ಸಂಸ್ಥೆಗಳು ಜೊತೆಯಾಗಿ ಯುಎಇ ಎಕ್ಸ್‌ಚೇಂಜ್ ಸೆಂಟರ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿದರು.

ಬ್ಯಾರಿಸ್ ವೆಲ್ಫೇರ್ ಫೋರಂ ಪರವಾಗಿ ಮುಹಮ್ಮದ್ ಅಲಿ ಉಚ್ಚಿಲ, ಅಬ್ದುಲ್ಲಾ ಮಡುಮೂಲೆ, ಅಬ್ದುಲ್ ರಾವುಫ್, ಹಮೀದ್ ಗುರುಪುರ, ನವಾಝ್ ಅಹ್ಮದ್ ಉಚ್ಚಿಲ ಮತ್ತು ಇರ್ಫಾನ್ ಅಹ್ಮದ್ ಉಪಸ್ಥಿತರಿದ್ದರು.

ಸುಧೀರ್ ಶೆಟ್ಟಿಯವರು ಸಮುದಾಯಕ್ಕೆ ನೀಡಿರುವ ಅಭೂತಪೂರ್ವ ಸೇವೆ, ಪರೋಪಕಾರಿ ಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆಗಾಗಿ ಬ್ಯಾರಿಸ್ ವೆಲ್ಫೇರ್ ಫೋರಂ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News