ಅಡ್ವಾಣಿ ನಿವೃತ್ತರಾಗುವಂತೆ ಒತ್ತಡ ಹೇರಲಾಗುತ್ತಿದೆ: ಶಿವಸೇನೆ

Update: 2019-03-23 17:29 GMT

ಮುಂಬೈ, ಮಾ.23: ಎಲ್‌ಕೆ ಅಡ್ವಾಣಿ ಚುನಾವಣೆಗೆ ನಿಲ್ಲದಿದ್ದರೂ ಅವರು ಬಿಜೆಪಿಯ ಉನ್ನತ ಮುಖಂಡರಾಗಿಯೇ ಉಳಿಯುತ್ತಾರೆ ಎಂದು ಶಿವಸೇನೆ ಹೇಳಿದೆ.

ಅಡ್ವಾಣಿಯವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯ ‘ಭೀಷ್ಮಾಚಾರ್ಯ’ರನ್ನು ನಿವೃತ್ತರಾಗುವಂತೆ ಒತ್ತಡ ಹೇರಲಾಗಿದೆ. ಈ ಬೆಳವಣಿಗೆ ಬಿಜೆಪಿಯಲ್ಲಿ ಅಡ್ವಾಣಿ ಯುಗ ಸಮಾಪ್ತಿಗೊಂಡ ಸೂಚನೆಯಾಗಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಬರೆದ ಸಂಪಾದಕೀಯ ಲೇಖನದಲ್ಲಿ ಹೇಳಲಾಗಿದೆ.

ಗುಜರಾತ್‌ನ ಗಾಂಧೀನಗರ ಕ್ಷೇತ್ರದಿಂದ ಅಡ್ವಾಣಿ ಆರು ಬಾರಿ ಗೆದ್ದಿದ್ದಾರೆ. ಈಗ ಅಮಿತ್ ಶಾ ಆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅಡ್ವಾಣಿಯನ್ನು ನಿವೃತ್ತರಾಗುವಂತೆ ಬಲವಂತಗೊಳಿಸಿರುವುದರ ಸಂಕೇತವಿದು ಎಂದು ಶಿವಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News