ಹಿರಿಯ ಪತ್ರಕರ್ತರ ರಾಜಣ್ಣ

Update: 2019-04-02 13:18 GMT

ಚಿಕ್ಕಮಗಳೂರು, ಎ.1: ಹಿರಿಯ ಪತ್ರಕರ್ತ ಎಂ.ಎಸ್.ರಾಜಣ್ಣ(64) ಸೋಮವಾರ ನಿಧನರಾಗಿದ್ದಾರೆ. 

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ನಿಧನರಾಗಿದ್ದು, ಇಂದು ಸ್ವಗ್ರಾಮ ಕಳಸಾಪುರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ರಾಜಣ್ಣ ರವರು ಪತ್ನಿ, ಮಗಳು ಮತ್ತು ಮಗ ಸೇರಿದಂತೆ  ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

ಕಳಸಾಪುರದ ಅಂಚೆ ಕಚೇರಿಯಲ್ಲೂ ಗ್ರಾಮೀಣ ಅಂಚೆ ನೌಕರನಾಗಿ ಸೇವೆ ಸಲ್ಲಿಸುತ್ತಾ ಜನಾನುರಾಗಿಯಾಗಿದ್ದರು. ಜಯಮಿತ್ರ ಸೇರಿದಂತೆ ವಿವಿಧ ಪತ್ರಿಕೆಗಳ ಏಜೆನ್ಸಿ ಹೊಂದಿದ್ದಲ್ಲದೇ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ