‘ಕೋಳಿಮರಿಯನ್ನು ಬದುಕಿಸಿ’ ಎಂದ ಬಾಲಕನಿಗೆ ವಿಶೇಷ ಗೌರವ
Update: 2019-04-05 15:28 GMT
ಹೊಸದಿಲ್ಲಿ, ಎ.5: ಮಿಝೋರಾಂನ ಆರು ವರ್ಷದ ಬಾಲಕ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ನೆರೆಮನೆಯವರ ಕೋಳಿ ಮರಿಗೆ ಢಿಕ್ಕಿ ಹೊಡೆದ ಪರಿಣಾಮ ಅದು ಸಾವನ್ನಪ್ಪಿದ್ದು, ಆ ಕೋಳಿಮರಿಯನ್ನು ಬಾಲಕ ಆಸ್ಪತ್ರೆಗೆ ಕರೆತಂದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ಆ ಬಾಲಕನ ಮುಗ್ಧತೆಗೆ ಮೆಚ್ಚಿ ಶಾಲೆಯಲ್ಲಿ ಆತನನ್ನು ಗೌರವಿಸಲಾಗಿದೆ.
ಬಾಲಕ ಶಾಲೆ ತನಗೆ ನೀಡಿದ ಪ್ರಮಾಣಪತ್ರದೊಂದಿಗೆ ನಿಂತಿರುವ ಫೋಟೋ ಇದೀಗ ವೈರಲ್ ಆಗಿದೆ. ಬಾಲಕನನ್ನು ಸನ್ಮಾನಿಸುವಾಗ ಆತನಿಗೆ ಶಾಲು ಹೊದಿಸಲಾಗಿದೆ ಎನ್ನುವುದೂ ಚಿತ್ರದಿಂದ ತಿಳಿದು ಬರುತ್ತದೆ. ಬಾಲಕನಿಗೆ ಮಿಝೋರಾಂನಲ್ಲಿ ಅಪ್ರತಿಮ ಸಾಹಸ ಮೆರೆದವರಿಗೆ ಗೌರವಸೂಚಕವಾಗಿ ಹೊದಿಸಲಾಗುವ `ತಾವ್ಲೋಹ್ ಪುವಾನ್' ಶಾಲು ಹೊದಿಸಲಾಗಿದೆ.