ಶ್ರೀಕಾಂತ್ ಪರಾಭವ

Update: 2019-04-12 18:49 GMT

ಸಿಂಗಾಪುರ, ಎ.12: ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಕಿಡಂಬಿ ಶ್ರೀಕಾಂತ್ ಅವರು ಅಗ್ರ ಶ್ರೇಯಾಂಕದ ಆಟಗಾರ ಜಪಾನ ಕೆಂಟೊ ಮೊಮೊಟಾ ವಿರುದ್ಧ 18-21, 21-19, 21-9 ಗೇಮ್‌ಗಳಿಂದ ಸೋತು ಟೂರ್ನಿಯಿಂದ ಹೊರ ನಡೆದರು.

ಮೊದಲ ಗೇಮ್‌ನ ಆರಂಭದಲ್ಲಿ ಜಪಾನ್ ಮೊಮೊಟಾ 18-12ರ ಮುನ್ನಡೆಯಲ್ಲಿದ್ದರು. ಆದರೆ ಶ್ರೀಕಾಂತ್ ತಿರುಗೇಟು ನೀಡುವಲ್ಲಿ ಯಶಸ್ವಿಯಾದರೂ ಗೇಮ್‌ನ್ನು 21-18ರಿಂದ ಮೊಮೊಟಾ ವಶಪಡಿಸಿಕೊಂಡರು.

ಎರಡನೇ ಗೇಮ್‌ನಲ್ಲಿ ಹೋರಾಟದ ಪ್ರದರ್ಶನದಿಂದ ಗಮನಸೆಳೆದ ಶ್ರೀಕಾಂತ್, 21-19ರಿಂದ ಗೆದ್ದು ನಿರ್ಣಾಯಕ ಮೂರನೇ ಗೇಮ್‌ಗೆ ತೆರಳಿದರು. ಆದರೆ ಭಾರತದ ಆಟಗಾರನಿಗೆ ನಿರಾಸೆ ಕಾದಿತ್ತು. ಅತ್ಯುತ್ತಮ ಪ್ರದರ್ಶನದಿಂದ ಸಂಪೂರ್ಣ ಪಾರಮ್ಯ ಮೆರೆದ ಮೊಮೊಟಾ 21-9ರಿಂದ ಗೇಮ್ ಗೆದ್ದು ಪಂದ್ಯವನ್ನೂ ವಶಕ್ಕೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News