ಸರಗಳ್ಳತನ ಆರೋಪಿಗಳ ಬಂಧನ

Update: 2019-04-17 17:41 GMT

ಬೆಂಗಳೂರು, ಎ.17: ಸರಗಳ್ಳತನ ಆರೋಪ ಪ್ರಕರಣ ಸಂಬಂದ ಮೂವರನ್ನು ಇಲ್ಲಿನ ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪ್ರದೀಪ್, ಮಂಜುನಾಥ್, ಸುನೀಲ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಒಂಟಿಯಾಗಿರುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಪ್ರದೀಪ್ ಮತ್ತು ಮಂಜುನಾಥ್. ಬಳಿಕ ಚಿನ್ನಾಭರಣವನ್ನು ಸುನೀಲ್‌ಗೆ ನೀಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣ, ಜ್ಞಾನಭಾರತಿ ಮತ್ತು ಮಾಗಡಿ ರಸ್ತೆ ಪೊಲೀಸ್ ಠಾಣೆಗಳಲ್ಲಿ 1 ಸರಗಳ್ಳತನ ಪ್ರಕರಣ ದಾಖಲಾಗಿದ್ದು, ಸದ್ಯ ಬಂಧಿತರಿಂದ 8 ಲಕ್ಷ ರೂ. ಬೆಲೆಬಾಳುವ 265 ಗ್ರಾಂ ತೂಕದ ಚಿನ್ನಾಭರಣ, ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News