ಸಾರ್ವಜನಿಕ ಸಭೆಯಲ್ಲಿ ಹಾರ್ದಿಕ್ ಪಟೇಲ್‌ಗೆ ಕಪಾಳಮೋಕ್ಷ

Update: 2019-04-19 06:50 GMT

ಹೊಸದಿಲ್ಲಿ, ಎ.19: ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗುಜರಾತ್‌ ರಾಜ್ಯದ ಸುರೇಂದ್ರನಗರ ಜಿಲ್ಲೆಯಲ್ಲಿ ಪಕ್ಷದ ರಾಜ್ಯ ಘಟಕ ಆಯೋಜಿಸಿದ್ದ ‘ಜನ್ ಆಕ್ರೋಶ್ ಸಭಾ’ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ವೇದಿಕೆ ಮೇಲೆ ಏರಿ ಬಂದ ಅಪಚಿತ ವ್ಯಕ್ತಿಯೊಬ್ಬ ಪಟೇಲ್‌ಗೆ ಕಪಾಳ ಮೋಕ್ಷ ಮಾಡಿದ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.

ಪಾಟಿದಾರ್ ಮೀಸಲಾತಿ ಹೋರಾಟದ ನಾಯಕ ಪಟೇಲ್ ಬಲ ಕೆನ್ನೆಗೆ ಹೊಡೆದ ವ್ಯಕ್ತಿಯನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಆತನ ಆಕ್ರೋಶಕ್ಕೆ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ. ಆತನನ್ನು ವೇದಿಕೆಯಲ್ಲಿದ್ದ ಜನರು ತಕ್ಷಣವೇ ಹಿಡಿದು ಪೊಲೀಸರ ವಶಕ್ಕೆ ನೀಡಿದರು.

25ರ ಹರೆಯದ ಪಟೇಲ್ 2015ರಲ್ಲಿ ಗುಜರಾತ್‌ನಲ್ಲಿ ಪಾಟಿದಾರ್‌ಗೆ ಪ್ರತ್ಯೇಕ ಮೀಸಲಾತಿ ಆಗ್ರಹಿಸಿ ಬೃಹತ್ ಜನಾಂದೋಲನ ನಡೆಸಿದ್ದರು. ಕಳೆದ ತಿಂಗಳು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಅವರು ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News