ಕೆಎಸ್ಸಾರ್ಟಿಸಿಗೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳು

Update: 2019-04-27 17:00 GMT

ಬೆಂಗಳೂರು, ಎ.27: ಕೆಎಸ್ಸಾರ್ಟಿಸಿ ಸಂಸ್ಥೆಗೆ ಕೇಂದ್ರ ಸರಕಾರದ ಪ್ರತಿಷ್ಠಿತ ಬದುಕಿನ ವಾತಾವರಣ ಪ್ರೋತ್ಸಾಹಿಸುವ ಉಪಕ್ರಮ 2018-19 ಹುಡ್ಕೋ ಪ್ರಶಸ್ತಿ ಹಾಗೂ ರಸ್ತೆ ಲಾಜಿಸ್ಟಿಕ್ಸ್‌ನಲ್ಲಿ (ಸರಕಾರಿ ಮತ್ತು ಖಾಸಗಿ ಸೇರಿ) ಪ್ರತಿಷ್ಠಿತ ಇಂಡಿಯನ್ ಆಯಿಲ್ ಟೈಮ್ಸ್ ನೌ ನೆಟ್‌ವರ್ಕ್ ಎಕ್ಸಲೆನ್ಸ್ ಪ್ರಶಸ್ತಿ ಪಡೆದುಕೊಂಡಿದೆ.

ನಿಗಮವು ದರ್ಜೆ 2 ಮತ್ತು ದರ್ಜೆ 3 ನಗರಗಳಲ್ಲಿ ನೀಡುತ್ತಿರುವ ಉತ್ತಮ ನಗರ ಸಾರಿಗೆ ಸೇವೆಗಳನ್ನು ಗುರುತಿಸಿ ಹುಡ್ಕೋ ಪ್ರಶಸ್ತಿಯನ್ನು ನಗರ ಸಾರಿಗೆ ವರ್ಗದಡಿ ರೂ. ಒಂದು ಲಕ್ಷ ನಗದು ಪುರಸ್ಕಾರದೊಂದಿಗೆ ಕೆಎಸ್ಸಾರ್ಟಿಸಿಗೆ ಪ್ರದಾನ ಮಾಡಲಾಗಿದೆ. ದಿಲ್ಲಿಯ ಇಂಡಿಯಾ ಹ್ಯಾಬಿಟಟ್ ಸೆಂಟರ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಹುಡ್ಕೋ ಅಧ್ಯಕ್ಷ ಡಾ.ಎಂ.ರವಿಕಾಂತ್, ಐಎಎಸ್ (ನಿ)ರಿಂದ ಪ್ರಶಸ್ತಿ ಸ್ವೀಕರಿಸಿದರು.

ಹೊಸದಿಲ್ಲಿಯಲ್ಲಿ ನಡೆದ ಇಂಡಿಯನ್ ಆಯಿಲ್ ಟೈಮ್ಸ್ ನೌ ನೆಟ್‌ವರ್ಕ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಪ್ರಯಾಣಿಕ ಸಾರಿಗೆ ಸಂಸ್ಥೆ(ಅಂತರ ನಗರ) ಭಾಗದಲ್ಲಿ ಕೆಎಸ್ಸಾರ್ಟಿಸಿಗೆ ಐಓಎಲ್ ಟೈಮ್ಸ್ ನೌ ನೆಟ್ವರ್ಕ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಟೈಮ್ಸ್ ನೌ ನೆಟ್ವರ್ಕ್‌ನ ಮುಖ್ಯ ಸಂಪಾದಕ ಮಿಹಿರ್ ಭಟ್ ಹಾಗೂ ಬ್ರಾಂಡಿಂಗ್ ಮಾರ್ಕೆಟಿಂಗ್ ನಿರ್ದೇಶಕ ಗುರುಮಿತ್ ಸಿಂಗ್ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದರಿಗೆ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News