ಕುಡಿಯುವ ನೀರಿನ ಸಮಸ್ಯೆ: ಶಾಸಕ ತಿಪ್ಪಾರೆಡ್ಡಿ, ಸಿಇಒ ನಡುವೆ ಮಾತಿನ ಚಕಮಕಿ
Update: 2019-04-29 16:34 GMT
ಚಿತ್ರದುರ್ಗ, ಎ.29: ಕ್ಷೇತ್ರದಲ್ಲಿನ ಕುಡಿಯುವ ನೀರಿನ ವಿಚಾರವಾಗಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಮತ್ತು ಸಿಇಒ ಸತ್ಯಭಾಮಾ ನಡುವೆ ಮಾತಿನ ಚಕಮಕಿ ನಡೆದಿದೆ.
ತಾಲೂಕಿನ ಸೋಲ್ಲಾಪುರ ಗ್ರಾಮಸ್ಥರು ಸೋಮವಾರ ಜಿಲ್ಲಾ ಪಂಚಾಯತ್ ಬಳಿ ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆಗೆ ಬಂದಿದ್ದರು. ಆಗ ಪ್ರತಿಭಟನಾಕಾರರ ಪರ ಶಾಸಕ ತಿಪ್ಪಾರೆಡ್ಡಿ ಜಿಲ್ಲಾ ಪಂಚಾಯತ್ಗೆ ತೆರಳಿದ್ದರು. ಈ ವೇಳೆ ಶಾಸಕ ಮತ್ತು ಸಿಇಒ ನಡುವೆ ವಾಗ್ವಾದ ನಡೆದಿದೆ. ಪಿಡಿಒಗಳನ್ನು ಕರೆಸಿ ಸಭೆ ಮಾಡಿ ಎಂದು ಶಾಸಕರು ಸಿಇಒಗೆ ತಾಕೀತು ಮಾಡಿದ್ದಾರೆ.