ಮೆಟ್ರೋ ಕೋಚ್ ನಿರ್ಮಾಣ ಕಾರ್ಯ ಬಿಇಎಂಎಲ್ ಗೆ ವಹಿಸಲು ಮುಖ್ಯಮಂತ್ರಿ ಮನವಿ

Update: 2019-05-08 16:43 GMT

ಬೆಂಗಳೂರು, ಮೇ 8: ಬೆಂಗಳೂರು ಎರಡನೆ ಹಂತದ ಮೆಟ್ರೋ ಯೋಜನೆಯ ಕೋಚ್ ನಿರ್ಮಾಣ ಕಾರ್ಯವನ್ನು ಬಿಇಎಂಎಲ್ ಸಂಸ್ಥೆಗೆ ವಹಿಸಬೇಕೆಂದು ಬಿಇಎಂಎಲ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ಹೂಟ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಮನವಿ ಮಾಡಿದರು.

ಬುಧವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಅವರು, ಮಹಾರಾಷ್ಟ್ರ ಮೆಟ್ರೋ ರೈಲು ಕಾರ್ಪೋರೇಷನ್‌ನಲ್ಲಿ ಶೇ.70ರಷ್ಟು ಕೋಚ್‌ಗಳನ್ನು ನಿರ್ಮಿಸಲು ಬಿಇಎಂಎಲ್‌ಗೆ ವಹಿಸಿದೆ. ಬಿಇಎಂಎಲ್ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕೋಚ್ ನಿರ್ಮಾಣ ಕಾರ್ಯವನ್ನು ವಹಿಸಿದಲ್ಲಿ ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತದೆ. ಈ ನಿಟ್ಟಿನಲ್ಲಿ ಕೋಚ್ ನಿರ್ಮಾಣ ಕಾರ್ಯವನ್ನು ಬಿಇಎಂಎಲ್‌ಗೆ ವಹಿಸುವಂತೆ ಅವರು ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಇಎಂಎಲ್ ಅಧ್ಯಕ್ಷ ಅಜಯ್ ಸೇಠ್ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News