ಯುವಕರಿಬ್ಬರ ಮೇಲೆ ಹಲ್ಲೆ: ಆರೋಪ

Update: 2019-05-11 16:09 GMT

ಬೆಂಗಳೂರು, ಮೇ 11: ಖಾಸಗಿ ಸಾರಿಗೆ ಸಂಸ್ಥೆ ಸೀಬರ್ಡ್ ಬಸ್ ಸಿಬ್ಬಂದಿ, ಯುವಕರಿಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ ಗೇಟ್ ಬಳಿ ಮಂಜುನಾಥ್ ಹಾಗೂ ರಘು ಎಂಬ ಇಬ್ಬರು ಯುವಕರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಸೀಬರ್ಡ್ ಬಸ್ ಚಾಲಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುತ್ತಿರುವುದನ್ನು ಕಂಡು ಬೈಕ್‌ನಲ್ಲಿದ್ದ ಮಂಜುನಾಥ್ ಹಾಗೂ ರಘು, ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಬಸ್ ಚಾಲಕ ಮತ್ತು ಸಿಬ್ಬಂದಿ ಟೋಲ್ ಗೇಟ್ ಬಳಿ ಇಬ್ಬರೂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಜುನಾಥ್ ಮೇಲೆ ಗಂಭೀರ ಹಲ್ಲೆ ಮಾಡಿ ರಸ್ತೆಯಲ್ಲೇ ಬಿಟ್ಟಿದ್ದಾರೆ. ಬಳಿಕ ರಘು ಅನ್ನು ಬಸ್‌ನೊಳಕ್ಕೆ ಎಳೆದುಕೊಂಡು ಸಕಲೇಶಪುರದವರೆಗೂ ಕರೆದುಕೊಂಡು ಹೋಗಿ ಅಲ್ಲಿಯೂ ಥಳಿಸಿ, ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸದ್ಯ ಗಾಯಾಳುಗಳಾದ ಮಂಜು ಮತ್ತು ರಘು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News