ಆಟದ ಮೈದಾನ ಉಳಿಸಿ ಹೋರಾಟಕ್ಕೆ ಎಚ್.ಎಸ್.ದೊರೆಸ್ವಾಮಿ ಬೆಂಬಲ

Update: 2019-05-17 16:37 GMT

ಬೆಂಗಳೂರು, ಮೇ 17: ಇಲ್ಲಿನ ನಂದಿನಿ ಲೇಔಟ್‌ನ ರಾಮಕೃಷ್ಣನಗರ ಮಕ್ಕಳ ಮೈದಾನ ಉಳಿಸಲು ಆಗ್ರಹಿಸಿ ಸ್ಥಳೀಯರು ಕೈಗೊಂಡಿರುವ ಅನಿದಿರ್ಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೆಂಬಲ ಸೂಚಿಸಿದ್ದಾರೆ.

ಶುಕ್ರವಾರ ಧರಣಿ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ದೊರೆಸ್ವಾಮಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದರು. ಮಕ್ಕಳ ಆಟದ ಮೈದಾನ ಅವರ ಹಕ್ಕು. ಅವರಿಗೆ ಸೂಕ್ತ ಮೈದಾನದ ವ್ಯವಸ್ಥೆ ಕಲ್ಪಿಸಬೇಕಾದುದು ಸರಕಾರದ ಜವಾಬ್ದಾರಿ ಎಂದು ದೊರೆಸ್ವಾಮಿ ಹೇಳಿದರು.

ಸರಕಾರ ಯಾವುದೇ ಕಾರಣಕ್ಕೂ ಆಟದ ಮೈದಾನದ ಜಾಗವನ್ನು ಶ್ರೀಮಂತರ ಮರ್ಜಿಗೆ ಬಲಿಯಾಗಿ ಅವರಿಗೆ ಬಿಟ್ಟುಕೊಡುವುದನ್ನು ಸಹಿಸಲು ಸಾಧ್ಯವಿಲ್ಲ. ಆಟದ ಮೈದಾನಕ್ಕಾಗಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ದೊರೆಸ್ವಾಮಿ ಇದೇ ವೇಳೆ ಘೋಷಿಸಿದರು. ಬಿಎಸ್ಪಿ ಮುಖಂಡ ಡಾ.ಶ್ರೀನಿವಾಸ್, ಜ್ಞಾನಮೂರ್ತಿ ಸೇರಿದಂತೆ ಸ್ಥಳೀಯ ಮಕ್ಕಳು, ಮಹಿಳೆಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News