ಕೇದಾರನಾಥದಲ್ಲಿ ನಾಟಕ ಮಾಡುತ್ತಿರುವ ಮೋದಿಯ ಬಗ್ಗೆ ಏನನ್ನುತ್ತೀರಿ: ಮಾಧ್ಯಮಗಳಿಗೆ ಕುಮಾರಸ್ವಾಮಿ ಪ್ರಶ್ನೆ
Update: 2019-05-19 11:17 GMT
ಮೈಸೂರು, ಮೇ 19: “ನಾನು ದೇವಸ್ಥಾನಕ್ಕೆ ಹೋದರೆ ಟೆಂಪಲ್ ರನ್ ಅನ್ನುತ್ತೀರಿ, ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ಹೋಗಿ ಧ್ಯಾನ ಮಾಡುತ್ತಿದ್ದೇನೆ ಎಂಬ ನಾಟಕವಾಡುತ್ತಿದ್ದಾರಲ್ಲ ಅದಕ್ಕೆ ಏನನ್ನುತ್ತೀರಿ” ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳನ್ನು ಪ್ರಶ್ನಿಸಿದರು.
“ನಾನು ನಿನ್ನೆ ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಪಡೆದೆ. ನಾವು ಮೊದಲಿನಿಂದಲೂ ದೇವರ ಮೇಲೆ ನಂಬಿಕೆ ಇಟ್ಟು ಬದುಕಿದವರು. ನಾನು ದೇವಸ್ಥಾನಗಳಿಗೆ ಹೋದರೆ ಸಿಎಂ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ಟೆಂಪಲ್ ಮಾಡುತ್ತಿದ್ದಾರೆ ಎನ್ನುತ್ತೀರಿ. ಮೋದಿ ಹೋಗಿರುವುದರ ಬಗ್ಗೆ ಮಾಧ್ಯಮಗಳು ಏಕೆ ಸತ್ಯ ಹೇಳುತ್ತಿಲ್ಲ? ಮೋದಿಯವರ ಕುರ್ಚಿ ಅಲುಗಾಡುತ್ತಿದೆ ಹಾಗಾಗಿ ಅವರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ” ಎಂದು ಸಿಎಂ ಹೇಳಿದರು