ಪೆಟ್ರೋಲ್ ಕಳವು ಮಾಡುತ್ತಿದ್ದ ಚಾಲಕ ಸೆರೆ
Update: 2019-05-20 17:03 GMT
ಬೆಂಗಳೂರು, ಮೇ 20: ತ್ರಿವೇಣಿ ಪೆಟ್ರೋಲ್ ಬಂಕ್ನಲ್ಲಿ ಯಾರು ಇಲ್ಲದ ವೇಳೆ ಪೆಟ್ರೋಲ್ ಕಳವು ಮಾಡುತ್ತಿದ್ದ ಆರೋಪದಡಿ ಚಾಲಕನೋರ್ವನನ್ನು ಇಲ್ಲಿನ ದಾಸರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ತುಮಕೂರಿನ ಮಧುಗಿರಿಯ ಕಾರು ಚಾಲಕ ರಮೇಶ್(28) ಕಳ್ಳತನ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ದಾಸರಹಳ್ಳಿ ಸಮೀಪ ಬಾಗಲಗುಂಟೆಯಲ್ಲಿರುವ ತ್ರಿವೇಣಿ ಪೆಟ್ರೋಲ್ ಬಂಕ್ನಲ್ಲಿ ರವಿವಾರ ತಡರಾತ್ರಿ 3:16ರ ವೇಳೆ ಇಂಡಿಕಾ ಕಾರಿನಲ್ಲಿ (ಕೆಎ01.ಎಬಿ 2339) ಬಂಕ್ ಒಳಗೆ ಬಂದು ಯಾರು ಇಲ್ಲದಿರುವುದನ್ನು ಗಮನಿಸಿದ ಕಾರು ಚಾಲಕ ತನ್ನ ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ಪರಾರಿಯಾಗುವಾಗ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ನಂತರ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಅವರ ವಶಕ್ಕೆ ಒಪ್ಪಿಸಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.