ಬೈಕ್‌ನಲ್ಲಿದ್ದ ನಗದು ದೋಚಿದ ದುಷ್ಕರ್ಮಿಗಳು

Update: 2019-05-22 17:22 GMT

ಬೆಂಗಳೂರು, ಮೇ 22: ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಬಳಿ ಇದ್ದ ನಗದು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಕೆಆರ್‌ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಾಥ್ ಎಂಬುವವರು ನಗರದ ಆವಲಹಳ್ಳಿಯ ಬ್ಯಾಂಕ್‌ವೊಂದರಲ್ಲಿ 48 ಸಾವಿರ ಹಣ ಪಡೆದುಕೊಂಡು ಬೈಕ್‌ನಲ್ಲಿಟ್ಟು, ಪತ್ನಿ, ಪುತ್ರನೊಂದಿಗೆ ತಿಂಡಿ ತಿನ್ನಲು ಹೊಟೇಲ್‌ಗೆ ಹೋಗಿದ್ದಾರೆ. ಈ ವೇಳೆ, ದುಷ್ಕರ್ಮಿಗಳು, ಬೈಕ್‌ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News