‘ಬಲವಾದ ಕಪಾಳಮೋಕ್ಷ’: ಸೋಲನ್ನು ಪ್ರಕಾಶ್ ರೈ ಬಣ್ಣಿಸಿದ್ದು ಹೀಗೆ…

Update: 2019-05-23 13:17 GMT

ಬೆಂಗಳೂರು, ಮೇ 23: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿರುವ ನಟ ಪ್ರಕಾಶ್ ರೈ, ‘ನನಗೆ ಇದು ಬಲವಾದ ಕಪಾಳಮೋಕ್ಷ’ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಿಝ್ವಾನ್ ಅರ್ಷದ್ ಹಾಗೂ ಬಿಜೆಪಿಯ ಪಿ ಸಿ ಮೋಹನ್ ವಿರುದ್ಧ  ಪ್ರಕಾಶ್ ಸ್ಪರ್ಧಿಸಿದ್ದರು.

``ನನ್ನ ಹಾದಿಯಲ್ಲಿ ಇನ್ನಷ್ಟು ನಿಂದನೆ, ಟ್ರೋಲ್ ಮತ್ತು ಅವಮಾನ ಬರುತ್ತಿರುವಂತೆಯೇ ಇದು ನನಗೆ ಬಲವಾದ ಕಪಾಳಮೋಕ್ಷ.  ಆದರೆ ನಾನು ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಜಾತ್ಯತೀತ ಭಾರತಕ್ಕೆ ನನ್ನ ಹೋರಾಟ ಮುಂದುವರಿಯುವುದು.  ಮುಂದಿನ ಕಠಿಣ ಪಯಣ ಈಗಷ್ಟೇ ಆರಂಭಗೊಂಡಿದೆ. ನನ್ನ ಈ ಪಯಣದಲ್ಲಿ ನನ್ನ ಜತೆಗಿದ್ದ ಎಲ್ಲರಿಗೂ ಧನ್ಯವಾದಗಳು, ಜೈ ಹಿಂದ್,'' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ಜನವರಿ 1ರಂದು ರಾಜಕೀಯ ಪ್ರವೇಶಿಸಿದ್ದ ಪ್ರಕಾಶ್ ನಾಮಪತ್ರ ಸಲ್ಲಿಸುವ ಮುಂಚೆಯೇ ಪ್ರಚಾರ ಆರಂಭಿಸಿದ್ದರು. ಮೋದಿ ಸರಕಾರದ ಕಟು ಟೀಕಾಕಾರರಾಗಿಯೂ ಅವರು ಗುರುತಿಸಲ್ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News