ನಮ್ಮಿಂದಲೇ ನಿಮಗೆ ಸೋಲಾಯಿತು: ದೇವೇಗೌಡರ ಎದುರು ಕಣ್ಣೀರು ಸುರಿಸಿದ ಸೊಸೆ ಭವಾನಿ ರೇವಣ್ಣ

Update: 2019-05-24 17:16 GMT

ಬೆಂಗಳೂರು, ಮೇ 24: ನಮ್ಮಿಂದಲೇ ನಿಮಗೆ ಸೋಲಾಯಿತು, ನಮ್ಮನ್ನು ಕ್ಷಮಿಸಿಬಿಡಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮುಂದೆ ಸೊಸೆ ಭವಾನಿ ರೇವಣ್ಣ ಕಣ್ಣೀರು ಸುರಿಸಿರುವ ಪ್ರಸಂಗ ನಡೆದಿದೆ. 

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಶುಕ್ರವಾರ ದೇವೇಗೌಡರನ್ನು ಭೇಟಿ ಮಾಡಿದ ಭವಾನಿ, ನಿಮ್ಮ ಸೋಲಿಗೆ ನಾವೇ ಕಾರಣವಾಗಿಬಿಟ್ಟೆವು, ನಮ್ಮಿಂದ ನಿಮಗೆ ಈ ಸ್ಥಿತಿ ಬಂತು ಎಂದು ಕಣ್ಣೀರಿಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುತ್ತಾರೆ, ನೀವು ಮತ್ತೆ ಹಾಸನದಿಂದ ಸ್ಪರ್ಧಿಸಿ, ಇಲ್ಲ ಎನ್ನಬೇಡಿ, ಎಂದು ಭವಾನಿ ಮನವಿ ಮಾಡಿದ್ದಾರೆ. ಆದರೆ ಗೌಡರು ಸೋಲು ಗೆಲುವು ಸಹಜ, ಅದಕ್ಕೆಲ್ಲಾ ಎದೆಗುಂದಬಾರದು ಎಂದು ಸಮಾಧಾನ ಹೇಳಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದರೂ ನಾವು ಸಂಭ್ರಮ ಪಟ್ಟಿಲ್ಲ. ದೇವೇಗೌಡರು ಸೋಲನ್ನು ಕಂಡಿರುವುದು ನಮಗೆ ನೋವಾಗಿದೆ. ಇದರಿಂದ ಕಾರ್ಯಕರ್ತರು ಕೂಡ ಬೇಸರಗೊಂಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಗೆಲುವನ್ನು ಸಂಭ್ರಮಿಸಲು ಪ್ರಜ್ವಲ್ ಹಾಗೂ ಕಾರ್ಯಕರ್ತರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತುಮಕೂರಿನಲ್ಲಿ ಆದ ಸೋಲಿನಿಂದ ಎಲ್ಲರಿಗೂ ನೋವಾಗಿದೆ. ನಾವು ಯಾರೂ ಕೂಡ ಗೆಲುವನ್ನು ಆಚರಿಸಿಲ್ಲ ಎಂದು ಭವಾನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News