ಕೆ.ವಾಸುದೇವ ಪ್ರಭು

Update: 2019-05-26 16:25 GMT

ಮೂಡುಬಿದಿರೆ: ಸಾಯಿಕೃಪಾ ಹೊಟೇಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಕೆ.ವಾಸುದೇವ ಪ್ರಭು(67ವ) ಅಲ್ಪಕಾಲದ ಅಸೌಖ್ಯದಿಂದ ಕಳೆದ ಮೇ 22ರಂದು ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. 

ಬೆಂಗಳೂರಿನ ಕಾಮತ್ ಹೊಟೇಲ್‍ನಲ್ಲಿ ಸಿಬಂದಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ವಾಸುದೇವ ಪ್ರಭು ಅವರು ಬಳಿಕ ಬಜಗೋಳಿಯ ಶ್ರೀ ನವದುರ್ಗಾ ದೇವಸ್ಥಾನದಲ್ಲಿ ದರ್ಶನಪಾತ್ರಿಯಾಗಿ ಕೆಲವು ದಶಕಗಳ ಸೇವೆ ಸಲ್ಲಿಸಿದ್ದರು. 1983ರಲ್ಲಿ ಮೂಡುಬಿದಿರೆಯ ಹಳೆ ಪೋಲೀಸ್ ಠಾಣೆಯ ಬಳಿ ಸಾಯಿ ಕೃಪಾ ಹೊಟೇಲ್ ಆರಂಭಿಸಿದ ಅವರು ಎಂಭತ್ತರ ದಶಕದಲ್ಲಿ ಮೂಡುಬಿದಿರೆಗೆ ಗೋಬಿ ಮಂಚೂರಿಯಂತಹ ಚೈನೀಸ್ ಫುಡ್ ಪರಿಚಯಿಸಿ ಗಮನ ಸೆಳೆದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ