40 ಸಾವಿರಕ್ಕೂ ಅಧಿಕ ಬೆಲೆಬಾಳುವ ಪಾದರಕ್ಷೆ, ನಗದು ಕಳವು

Update: 2019-06-08 18:27 GMT

ಬೆಂಗಳೂರು, ಜೂ.8: ಮಾರತಹಳ್ಳಿ ಬಳಿಯ ಬಾಟಾ ಮಳಿಗೆಯ ಬೀಗ ಒಡೆದ ದುಷ್ಕರ್ಮಿಗಳು 40 ಸಾವಿರ ರೂ. ಬೆಲೆಬಾಳುವ ಪಾದರಕ್ಷೆಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ತಡರಾತ್ರಿ 10 ಗಂಟೆ ಸುಮಾರಿಗೆ ಮಳಿಗೆ ಮಾಲಕ ಶರ್ಮಾ, ಅಂಗಡಿ ಬಂದ್ ಮಾಡಿ, ಸಿಬ್ಬಂದಿ ಸಾಗರ್‌ಎಂಬುವವರ ಬಳಿ ಕೀ ಕೊಟ್ಟು ಹೋಗಿದ್ದರು. ಬಳಿಕ ದುಷ್ಕರ್ಮಿಗಳು, ಮಳಿಗೆಗೆ ನುಗ್ಗಿ ಸುಮಾರು 40 ಸಾವಿರಕ್ಕೂ ಅಧಿಕ ಬೆಲೆಬಾಳುವ ಪಾದರಕ್ಷೆ ಹಾಗೂ ನಗದು ಹಣ ಕಳವು ಮಾಡಿದ್ದಾರೆ ಎನ್ನಲಾಗಿದೆ.

ಸಾಗರ್, ಶನಿವಾರ ಮಳಿಗೆ ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಅಂಗಡಿ ಮಾಲಕ ಶರ್ಮಾ, ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿ, ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News