ಅಪರಿಚಿತ ವಾಹನ ಢಿಕ್ಕಿ; ಭದ್ರತಾ ಸಿಬ್ಬಂದಿ ಸಾವು

Update: 2019-06-10 18:12 GMT

ಬೆಂಗಳೂರು, ಜೂ.10: ಕೆಂಗೇರಿಯ ಉಪಗ್ರಹ ಬಸ್ ನಿಲ್ದಾಣದ ಕದಂಬ ಹೊಟೇಲ್ ಬಳಿ ರವಿವಾರ ರಾತ್ರಿ ರಸ್ತೆ ದಾಟುತ್ತಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಅಪರಿಚಿತ ವಾಹನ ಹರಿದು ಮೃತಪಟ್ಟಿದ್ದಾರೆ.

ಮರಿಯಪ್ಪನಪಾಳ್ಯದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ(42) ಎಂಬುವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಕೆಂಗೇರಿ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News