ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒಳಾಂಗಣ ಆ್ಯಂಬುಲೆನ್ಸ್ ಸೇವೆ

Update: 2019-06-12 18:07 GMT

ಬೆಂಗಳೂರು, ಜೂ.12: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೋಗಿಗಳ ತುರ್ತು ಸೇವೆಗಾಗಿ ಒಳಾಂಗಣ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆ.

ಪ್ರಿವೆಲೆನ್ಸ್ ಗ್ರೀನ್ ಸೊಲ್ಯೂಷನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಆ್ಯಂಬುಲೆನ್ಸ್‌ಗಳು ಬ್ಯಾಟರಿ ಚಾಲಿತವಾಗಿವೆ. ದಿನದ 24ಗಂಟೆಯು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ದೇಶಿ ಟರ್ಮಿನಲ್‌ಗಳಲ್ಲಿ ಎರಡು ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸಲಿವೆ. ಇದಕ್ಕಾಗಿ ಆ್ಯಸ್ಟರ್ ಆಸ್ಪತ್ರೆಯ ನುರಿತ ವೈದ್ಯರ ತಂಡ ನಿಯೋಜಿಸಲಾಗಿದೆ ಎಂದು ಬಿಐಎಎಲ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಥಾಮಸ್ ಆ್ಯಂಡರ್‌ಸನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News