ನಮ್ಮ ಮೇಲೆ ವಿಶ್ವಕಪ್ ಗೆಲ್ಲುವ ಒತ್ತಡವಿಲ್ಲ: ಪಾಂಡ್ಯ

Update: 2019-06-13 18:41 GMT

ನಾಟಿಂಗ್‌ಹ್ಯಾಮ್, ಜೂ.13: ಕೇವಲ 150 ಕೋಟಿ ಜನರು ಮಾತ್ರ ಭಾರತ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾಗಿ ನಮಗೆ ಯಾವುದೇ ರೀತಿಯ ಒತ್ತಡವಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ನಮ್ಮ ಏಕೈಕ ಗುರಿ ವಿಶ್ವಕಪ್ ಗೆಲ್ಲುವುದಾಗಿದೆ ಎಂದ 25ರ ಹರೆಯದ ಹಾರ್ದಿಕ್,‘‘ಜುಲೈ 14 ರಂದು ನನ್ನ ಕೈಯ್ಯಲ್ಲಿ ವಿಶ್ವಕಪ್ ಹಿಡಿದುಕೊಳ್ಳಲು ಬಯಸಿದ್ದೇನೆ. ವಿಶ್ವಕಪ್ ಗೆಲ್ಲುವುದೇ ನನ್ನ ಮುಂದಿರುವ ಸರಳ ಉಪಾಯ. ನಾನು ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದೇನೆ. ನನ್ನಿಂದಲೇ ಇದೇ ನಿರೀಕ್ಷೆ ಮಾಡುತ್ತಿದ್ದೇನೆ’’ ಎಂದರು.

ಭಾರತ ಪರ ಆಡುವುದೆಂದರೆ ನನಗೆ ಸರ್ವಸ್ವ. ಇದು ನನ್ನ ಜೀವನ. ನಾನು ಕ್ರಿಕೆಟನ್ನು ಆಡಲು ತುಂಬಾ ಇಷ್ಟಪಡುವೆ. ಕಠಿಣ ಸವಾಲನ್ನು ಇಷ್ಟಪಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News