ಪೊಲೀಸರ ಪರಿಹಾರ ಭತ್ತೆ ಹೆಚ್ಚಳ

Update: 2019-06-19 17:52 GMT

ಬೆಂಗಳೂರು, ಜೂ.19: ರಾಜ್ಯ ಪೊಲೀಸ್ ಇಲಾಖೆಯ ಪೇದೆಗಳ ಮಾಸಿಕ ಕಷ್ಟ ಪರಿಹಾರ ಭತ್ತೆಯನ್ನು 1 ಸಾವಿರ ರೂಪಾಯಿ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬುಧವಾರ ಆದೇಶ ಹೊರಡಿಸಿರುವ ರಾಜ್ಯ ಸರಕಾರ, 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಪೊಲೀಸ್ ಇಲಾಖೆಯ ಪೊಲೀಸ್ ಪೇದೆಗಳಿಗೆ ಮಂಜೂರು ಮಾಡಿರುವ ಮಾಸಿಕ 1 ಸಾವಿರ ರೂ. ಕಷ್ಟ ಪರಿಹಾರ ಭತ್ತೆ ಮುಂದುವರೆಸಲಾಗಿದೆ ಎಂದು ತಿಳಿಸಿದೆ.

2019-20 ಆಯವ್ಯಯ ಭಾಷಣದಲ್ಲಿ ಕಷ್ಟ ಪರಿಹಾರ ಭತ್ತೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಅದರಂತೆ, 1 ಸಾವಿರ ರೂ. ಇದ್ದ ಕಷ್ಟ ಪರಿಹಾರ ಭತ್ತೆಯನ್ನು 2 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಸರಕಾರದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News