ವಿಶ್ವಕಪ್‌ನಿಂದ ಧವನ್ ಔಟ್

Update: 2019-06-20 18:50 GMT

ಹೊಸದಿಲ್ಲಿ, ಜೂ.20: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಬೆರಳುಮೂಳೆ ಮುರಿತಕ್ಕೊಳಗಾದ ಹಿನ್ನೆಲೆಯಲ್ಲಿ ವಿಶ್ವಕಪ್‌ನಿಂದ ಹೊರಗುಳಿದಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಟ್ವೀಟ್ ಮೂಲಕ ಕನಿಕರ ವ್ಯಕ್ತಪಡಿಸಿದರು.

ಆಸ್ಟ್ರೇಲಿಯ ವಿರುದ್ಧ ಪಂದ್ಯದ ವೇಳೆ ಚೆಂಡು ತಗಲಿ ಹೆಬ್ಬೆರಳ ಮುರಿತಕ್ಕೊಳಗಾಗಿದ್ದ ಧವನ್ ಅವರ ವಿಶ್ವಕಪ್ ಅಭಿಯಾನ ಎರಡೇ ಪಂದ್ಯಕ್ಕೆ ಸೀಮಿತವಾಗಿತ್ತು. ‘‘ಪ್ರೀತಿಯ ಧವನ್, ಪಿಚ್ ನಿಮ್ಮನ್ನು ಮಿಸ್ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ನೀವು ಆದಷ್ಟು ಬೇಗನೆ ಚೇತರಿಸಿಕೊಂಡು ಮೈದಾನಕ್ಕೆ ವಾಪಸಾಗಿ ದೇಶದ ಗೆಲುವಿಗೆ ಇನ್ನಷ್ಟು ಕೊಡುವ ನೀಡುವ ವಿಶ್ವಾಸ ನನಗಿದೆ’’ ಎಂದು ಎಡಗೈ ದಾಂಡಿಗನಿಗೆ ಮೋದಿ ಟ್ವೀಟ್ ಮಾಡಿದ್ದಾರೆ.

ಧವನ್ ವಿಶ್ವಕಪ್‌ನಿಂದ ಹೊರಗುಳಿದಿರುವುದಕ್ಕೆ ಹಲವು ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದು, ಶೀಘ್ರವೇ ಗುಣಮುಖವಾಗಲೆಂದು ಹಾರೈಸಿದ್ದಾರೆ. ಇದೀಗ ಧವನ್ ಬದಲಿಗೆ ದಿಲ್ಲಿಯ ಇನ್ನೋರ್ವ ಆಟಗಾರ ರಿಷಭ್ ಪಂತ್ ಭಾರತೀಯ ತಂಡವನ್ನು ಸೇರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News